Monday, November 25, 2013

ರಾಜ್ಯೋ ತ್ಸವ

 
ನವೆಂಬರ್  ಬಂತೆಂದರೆ ಬೀದಿ ಬೀದಿಗಳಲ್ಲಿ 
ಕನ್ನಡ ರಾಜ್ಯೋ ತ್ಸವದ 
ಸಂಬ್ರಮ ಸಡಗರ 
ರಸ್ತೆಯ ಉದ್ದಗಲಕ್ಕೂ ಹಳದಿ ,ಕೆಂಪು ಬಣ್ಣದ 
ತಳಿರು  ತೋರಣಗಳಿಂದ ಸಿಂಗಾರ 

ಅಂದು ಮಠ ,ಮಂದಿರ ,ಆಸ್ಪತ್ರೆ 
ಶಾಲೆಗಳ ಅರಿವಿಲ್ಲದೆ 
ದ್ವನಿ ವರ್ದಕಗಳ ಅಬ್ಬರ 

ಎಂದು ನೆನೆಯದ ಕವಿಗಳ ,ಹಿರಿಯರ ಹಾಗು 
ಭುವನೇಶ್ವರಿ ದೇವಿ
 ಫೋಟೋಗಳಿಗೆ ಹೂವಿನ ಅಲಂಕಾರ 

ತಮಗೆ ಇಷ್ಟವಾದ  ಅಯೋಗ್ಯರಿಗೆ 
ರಾಜಕೀಯ ಪುಡಾರಿಗಳಿಗೆ
ಕನ್ನಡ ಪಲಕಗಳೊಂದಿಗೆ ಪುರಸ್ಕಾರ 

ಪಟಾಕಿ ಸಿಡಿಮದ್ದು ಸಿಡಿಸಿ ಪ್ಲಾಸ್ಟಿಕ್
 ಬಾವುಟಗಳನ್ನು ಹಾರಿಸಿ 
ಪರಿಸರ ಕಾಳಜಿ ಇಲ್ಲದವರ ಹಾಹಾಕಾರ  

 ನಾಡು ,ನುಡಿ ,ಕಲೆ ,ಸಂಸೃತಿಯ ಬಗ್ಗೆ
 ಗಂಬೀರ ಚಿಂತನೆ ಇಲ್ಲದೆ 
ಎಲ್ಲೆಲ್ಲೂ ನಟ ನಟಿಯರ ರಸಮಂಜರಿಯ ಚಿತ್ಕಾರ
 
ಇದು ಇಂದಿನ ಪೀಳಿಗೆಯ ಕನ್ನಡ ಅಬಿಮಾನಿಗಳು 
ಕನ್ನಡಾಂಬೆ ಹೆಸರಿನಲ್ಲಿ ಮಾಡುವ ಸುಲಿಗೆ 
ರಾಜ್ಯೋ ತ್ಸವ ನೆಪದಲ್ಲಿ  ಮಾಡುವ ದಂಧೆ.

Thursday, November 21, 2013

ಟೆಲಿಕಾಂ



ನಾವಿರೋದಂತು  ಪಕ್ಕಾ ಟೆಲಿಕಾಂ
I&C,ನೆಟ್ ವರ್ಕ್ ಇಂಪ್ಲ್ಲ್ಲಿಮೆಂಟ್ಶಟೇಷನ್ ನಮ್ ಕಾಮ್
ಹೇಳೋ ತರ ಎನಿರೋಲ್ಲ ನಮ್ ಇನ್ಕಮ್
ಕೆಳ್ದೊರಿಗೆ ಹೇಳ್ತಿವಿ ಲಮ್ ಸಮ್

ಊರು, ಕೇರಿ, ಗಲ್ಲಿ ಗಲ್ಲಿ, ದೇಶ  ಸುತ್ತೋದೆ
ನಮಗೆ ಸಿಗೋ ಅದ್ರುಷ್ಟ
ಬ್ಯಾಚುಲರ್  ಲೈಫ್ ನಲ್ಲಿ ತಿರುಗಾಡೋದಕ್ಕೆ
ಮಾತ್ರ ಬಲು ಇಷ್ಟ
ಏನೇ ಅಂದ್ರು ಮನೆ ಮಠ  ಬಿಟ್ಟು ಈ
ಅಲೆಮಾರಿ ಜೀವನ ಒಂತರಾ  ಕಷ್ಟ

ಇದರಲ್ಲಿ ಬೆಳಿಬೇಕು  ಅಂದ್ರೆ ಸ್ವಲ್ಪ
ತಲೆ ಓಡಿಸಬೇಕು
ದುಡಿಬೇಕು ಅಂದ್ರೆ ಬಾಡಿ ಮೈನ್ ಟೈನ್
 ಮಾಡಿರಬೇಕು

ಹಣ ಉಳಿತಾಯ ಮಾಡಬೇಕು  ಅಂದ್ರೆ
 ಚಾಲಾಕಿತನ ತೋರಿಸಬೇಕು
ಜೊತೆಗೆ ಅಡ್ಡ ದಾರಿನು ತಿಳ್ಕೊಂಡಿರ ಬೇಕು
ಟೈಮ್ ನೋಡಿ use ಮಾಡ್ಕೊಬೇಕು

ನಿನ್ ಹೆಲ್ತ್  ನೀನೇ ನೋಡ್ಕೋಬೇಕು ಹೊರಗೆ
ತಿನ್ನೋದು ,ಕುಡಿಯೋದ್ರಲ್ಲಿ
ಕೆಲಸ ಮಾಡ್ಬೇಕಾದ್ರೆ ಸೇಫ್ಟಿ ರೂಲ್ಸ್ ಫಾಲೋ
ಮಾಡಬೇಕು ಸೈಟ್ ನಲ್ಲಿ

ಯಮಾರಿದ್ರೆ ಅಡ್ರೆಸ್ ಗೆ ಇಲ್ಲದಂಗೆ ಏನಾಗ್ತಿಯಾ
ಅಂತ ಗೊತ್ತೇ  ಆಗೋಲ್ಲ
ಮೊದಲೇ  ಹೆಲ್ತ್ ಇನ್ಸುರೆನ್ಸ್ ಇಲ್ಲದ ಕಂಪನಿಗಳು
ಯಾವ MD,ED & HR ನು ಎನಾಗಿದಿಯಾ
ಅಂತ ಮೂಸಿ ಕೂಡ ನೋಡಲ್ಲ.

Saturday, August 17, 2013

ಘಾಸಿ


ಕುರುಡು ಭವಿಷ್ಯ
 ಕತ್ತಲಾವರಿಸಿದಾಗ
ಹಲ್ಲೆ ಮಾಡಿತೊಂದು 
 ಸುಳ್ಳು ಮಾತು !

ತೀವ್ರ ಘಾಸಿಗೊಳಗಾಗಿತು 
 ಮನಸು
ಕಂಗಾಲಾಗಿ ಮೌನಕೆ
 ಶರಣಾಯಿತು ಹೃದಯ !!

Tuesday, August 6, 2013

ಚದುರಿದ ಕನಸುಗಳು



1

ಕಂಡ ಕನಸುಸೊಂದು
 ನಿಜವಾಗಿತ್ತು
ನನಸಾಗಿಸಲು ಮಾತಾಡಿ
 ಬಂದಿದಾಗಿತ್ತು
ಕಣ್ಣು ತೆರೆದು ನೋಡಿದಾಗ
ಬೆಳಕಾಗಿತ್ತು

2

ಮಳೆ ಬಂದು ಮನಸು
ತಂಪಾಗುತ್ತದೆ ಎನಿಸಿತು
ತಕ್ಷಣ
ಕಾಮನ ಬಿಲ್ಲು ಮೂಡಿ
ಕಣ್ಣು ಕಟ್ಟಿದಂತಾಯಿತು

Monday, July 29, 2013

ದೂರದೂರಿಗೆ



ಕನಸಿನ ಮೊಟೆಯನ್ನು ಹೊತ್ತುಕೊಂಡು
ಮರಳಿ ಬಂದೆ
ಆಕಾಶದಲ್ಲಿ ತೇಲುವಂತೆ

೩ ದಿನದೊಳಗೆ ಕರೆ ಬಂದಿತು
ಕಣ್ಣಿರಿನ ಹನಿ ಜಾರುವಂತೆ

ಕೆಲಸದ ಒತ್ತಡವು ಕೇಕೆ ಹಾಕುತಿತ್ತು
ಕನಸು ಕಮರಿ ಹೋಗುವಂತೆ

ಮನಸಿಲ್ಲದೇ ಹೊರಟಿದೆ ಕಾಯವು
ದೂರದೂರಿಗೆ
ಕಾಯಕವ ಬೆನ್ನತ್ತಿಕೊಂಡು

ಭವಿಷ್ಯದಲ್ಲಿ ನನಗು ಉತ್ತಮ ದಿನಗಳು
ಬರುತ್ತವೆ
ಎಂಬ ನಿರೀಕ್ಷೆ ಇಟ್ಟುಕೊಂಡು .....

Monday, July 8, 2013

ಕಣ್ಣೋಟ


ಹೆಣ್ಣೇ..!
ನಿನ್ನ ಕಣ್ಣಿನ ನೋಟ
ರಾಮನ ಬಾಣಕ್ಕಿಂತ
ಬಲು ತೀಕ್ಷ್ಣ !

ಒಮ್ಮೆ ದೃಷ್ಟಿ ಹರಿಸಿದರೆ ಸೀಳುವುದು
ಗಂಡಿನ ಹೃದಯ
ಆ ಕ್ಷಣ !!

Friday, June 28, 2013

मेरे मनपसंद


जिंदगी युही चलती रहेगी
सुख दुख के जुगलबंदी के साथ
भगवान ने बनाये हुए रास्ते पे

कुछ लोग मिलते है
कुछ लोग बिछड जाते है
फिर भी जिंदगी युही चलती रहेगी

मेरे मनपसंद है आप लोग
भूल नाही जा सकते हे कभीभी
हमेशा मेरे छोटेसे दिल मे
 याद बनके रहोगे .....